20 October 2010
ಇಂದು ಕ್ರೀಡಾ ದಿನ
ಶಾಲಾ ಮಟ್ಟದ ಕ್ರೀಡಾ ಚಟುವಟಿಕೆಗಳು ಇಂದು ಮತ್ತು ನಾಳೆ ನಡೆಯಲಿವೆ. ವಿದ್ಯಾರ್ಥಿಗಳು ಹೊಸ ಉನ್ಮೇಷದೊಂದಿಗೆ ಸ್ಪರ್ಧೆಗಳಲ್ಲಿ ತಲ್ಲೀನರಾಗಿದ್ದಾರೆ. ಆಟ, ಓಟ... ಹೀಗೆ ಮೈದಾನ ತುಂಬ ಚಟುವಟಿಕೆಗಳು... ಎಲ್ಲ ಸ್ಪರ್ಧಾಳುಗಳಿಗೆ ನಮ್ಮ ಶುಭಾಶಯಗಳು.
19 October 2010
ಹಾಲು ವಿತರಣೆ
ಕೇರಳ ಸರಕಾರ ರಾಜ್ಯ ಮಟ್ಟದಲ್ಲಿ ವಾರದ ಎರಡು ದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸಲು ನಿರ್ಧರಿಸಿದೆ. ಆ ಪ್ರಕಾರ ಇಂದು ಈ ಕಾರ್ಯಕ್ರಮದ ಶಾಲಾ ಉದ್ಘಾಟನೆಯನ್ನು ನಮ್ಮ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಂ. ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು.
ಶ್ರೀ ಶಾರದಾ ಪೂಜೆ
ಮೊನ್ನೆ ಭಾನುವಾರ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆಯ ಸಂಭ್ರಮ. ಶ್ರೀಯುತ ಗೋಪಾಲಕೃಷ್ಣ ಭಟ್ಟರು ಶಾರದಾ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಷ್ಟಾವಧಾನ ಸೇವೆ ನಮ್ಮ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ಎಸ್. ವಿ. ಭಟ್ಟರ ನೇತೃತ್ವದಲ್ಲಿ ಶ್ರೀ ಶಾರದಾಂಬೆಗೆ ಅಷ್ಟಾವಧಾನ ಸೇವೆ ಜರಗಿತು. ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಒಂದು ಕಹಿ ನೆನಪು ನಮ್ಮನ್ನು ಕಾಡುತ್ತಿತ್ತು. ಕಳೆದ ವರ್ಷ ನಮ್ಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇದೇ ದಿನ ೧೭.೧೦.೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಎರಡು ದಿನ ಮ್ಲಾನವಾಗಿ ಕಳೆದು ಹೋಯಿತು. ಮೃತರ ಆತ್ಮಕ್ಕೆ ಮತ್ತೆ ನಮನಗಳನ್ನು ಸಲ್ಲಿಸುತ್ತೇವೆ...
13 October 2010
ಕೇರಳ ಕ್ರೀಡಾ ದಿನ ಆಚರಣೆ
11 October 2010
ಶಾಲೆ ತುಂಬ ಕಲೋತ್ಸವದ ಕಲರವ
07 October 2010
05 October 2010
ಗರ್ತಿಕೆರೆ ರಾಘಣ್ಣ ಗಾನ ಸುಧೆ
ಖ್ಯಾತ ಗಾಯಕ, ರಾಜ್ಯ ಪ್ರಶಸ್ತಿ ವಿಜೇತ ಹೊ.ನಾ.ರಾಘವೇಂದ್ರ ರಾವ್ (ಗರ್ತಿಕೆರೆ ರಾಘಣ್ಣ) ಇವರಿಂದ ಗಾನ ಸುಧೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ೦೪.೧೦.೨೦೧೦ ಸೋಮವಾರ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿ, ಖ್ಯಾತ ಸಾಹಿತಿ ಎಂ.ವಿ.ಭಟ್ ಮಧುರಂಗಾನ, ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲ ಮಧುರಕಾನನ ಗಾಯಕರನ್ನು ಪರಿಚಯಿಸಿ ಸ್ವಾಗತಿಸಿದರು. ಹಿರಿಯ ಅಧ್ಯಾಪಿಕೆ ವಾಣಿ. ಪಿ.ಎಸ್ ವಂದಿಸಿದರು.
04 October 2010
ನಮ್ಮ ತರಾವರಿ ತೋಟ
02 October 2010
Subscribe to:
Posts (Atom)