ಈ ವಾರ ನಮ್ಮ ಪ್ರಯಾಣ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ. ಪಠ್ಯದ ವಿಚಾರಗಳನ್ನು ಕಣ್ಣಾರೆ ಕಂಡು ಪರಾಂಬರಿಸುವ ನಿಟ್ಟಿನಲ್ಲಿ ಇಂದು ನೀರ್ಚಾಲಿನ ಮೇಲಿನ ಪೇಟೆಯ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ ನಮ್ಮ ಸಂದರ್ಶನದ ಛಾಯಾಚಿತ್ರ ನಿಮ್ಮ ಮುಂದೆ...
29 July 2011
22 July 2011
‘ಚೈತನ್ಯ ಕ್ಲಬ್’ ಉದ್ಘಾಟನೆ
"ಜಗತ್ತು ಆಧುನಿಕತೆಯ ಕಡೆಗೆ ಸಾಗುತ್ತಿರುವಂತೆ ವಿದ್ಯುತ್ತಿನ ಉಪಯೋಗ ವಿಪರೀತವಾಗಿ ಹೆಚ್ಚುತ್ತಿದೆ. ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ ಮೂರು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ ಎಂಬ ಸ್ಥಿತಿಗೆ ನಾವು ತಲಪಿದ್ದೇವೆ. ಹಾಗಾಗಿ ಮನೆಮನಗಳಲ್ಲಿ ಚೈತನ್ಯದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ವಿದ್ಯುತ್ ಇಲಾಖೆಯು ವಿದ್ಯಾಭ್ಯಾಸ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಚೈತನ್ಯದ ಸಂರಕ್ಷಣೆಯ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ಯುತ್ತಿನ ದುರ್ಬಳಕೆಯನ್ನು ತಡೆಗಟ್ಟಿ ನಾಳೆಗಾಗಿ ಒಂದಿಷ್ಟು ಚೈತನ್ಯ ಉಳಿಸೋಣ" ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಬದಿಯಡ್ಕ ವಿಭಾಗದ ಸಹಾಯಕ ಇಂಜಿನಿಯರ್ ರಾಜಗೋಪಾಲ.ಕೆ.ಬಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ಸರಕಾರದ ‘ನಾಳೆಗಾಗಿ ಚೈತನ್ಯ’ ಯೋಜನೆಯ ಅಂಗವಾಗಿ ಆರಂಭವಾದ ‘ಚೈತನ್ಯ ಕ್ಲಬ್’ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್ ಮತ್ತು ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ, ಶಶಾಂಕ ಶರ್ಮ.ಎಸ್ ವಂದಿಸಿದರು. ವರ್ಷಾ.ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯುತ್ ಉಳಿತಾಯದ ಮಹತ್ವವನ್ನು ವಿವರಿಸುವ ಸ್ಲೈಡ್ ಪ್ರದರ್ಶನ ನಡೆಸಲಾಯಿತು. ವಿದ್ಯುತ್ ಉತ್ಪಾದನೆ ಮತ್ತು ಪ್ರೇಷಣೆಯ ಹಂತಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಈ ಸಂದರ್ಭಲ್ಲಿ ಬಗೆಹರಿಸಿಕೊಂಡರು.
19 July 2011
ಮತ್ತೆ ಸಿ ಪಿ ಸಿ ಆರ್ ಐ ಪ್ರವಾಸ...
ನಮ್ಮ ವಾರ್ಷಿಕ ಚಟುವಟಿಕೆಗಳ ಭಾಗವಾಗಿ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ ಪ್ರವಾಸ ಹೋಗಿದ್ದೆವು ಮೊನ್ನೆ ಶನಿವಾರ ಜುಲೈ ೧೬ಕ್ಕೆ. ಬಡ್ಡಿಂಗ್, ಗ್ರಾಫ್ಟಿಂಗ್, ಎರೆಹುಳ ಗೊಬ್ಬರ ತಯಾರಿ ಇತ್ಯಾದಿಗಳನ್ನು ನೋಡಿ ಹೊಸ ಮಾಹಿತಿ ತಿಳಿದು ಬಂದಿದ್ದೇವೆ. ಇದು ನಮ್ಮ ವಾರ್ಷಿಕ ಚಟುವಟಿಕೆಗಳಾದರೂ ವಿದ್ಯಾರ್ಥಿಗಳಿಗೆ ಹೊಸ ಅನುಭವ ಎಂಬುದರಲ್ಲಿ ಸಂಶಯವಿಲ್ಲ.
08 July 2011
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆ
ನಮ್ಮ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆಯನ್ನು ಶಾಲಾ ಸಂಸ್ಕೃತ ಅಧ್ಯಾಪಕರಾದ ಶ್ರೀಯುತ ಎಸ್.ವಿ.ಭಟ್ ಇಂದು ಮಧ್ಯಾಹ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಕ ಶ್ರೀ ಎಂ.ಸೂರ್ಯನಾರಾಯಣ ವಿದ್ಯಾರ್ಥಿಗಳ ಹಸ್ತಪ್ರತಿ ‘ಗಾಯತ್ರಿ’ ಯನ್ನು ಬಿಡುಗಡೆಗೊಳಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ವಾಣಿ. ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಅಂಗವಾಗಿ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.
ರಕ್ಷಕ ಶಿಕ್ಷಕ ಸಂಘ
01 July 2011
ಶೇಖರಕಾನ...
Subscribe to:
Posts (Atom)