Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 November 2012

ಜಿಲ್ಲಾ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ



 20.11.2012 ರಂದು ಚಟ್ಟಂಚಾಲ್‌ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ‘ಸ್ಥಿರ ಮಾದರಿ’ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಲ್ಲಿಕೋಟೆಯಲ್ಲಿ ಜರಗಲಿರುವ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಸ್ವಾಗತ ರೈ. ಬಿ ಮತ್ತು ಅಭಿಲಾಶ್ ಶರ್ಮ. ಕೆ ಅರ್ಹತೆ ಪಡೆದಿದ್ದಾರೆ. ಸ್ವಾಗತ ರೈ - ಶಿಕ್ಷಕ ದಂಪತಿಯರಾದ ಚಂದ್ರಶೇಖರ ರೈ. ಕೆ ಮತ್ತು ಚಂದ್ರಾವತಿ. ಬಿ ಇವರ ಸುಪುತ್ರಿ. ಅಭಿಲಾಶ್ ಶರ್ಮ.ಕೆ - ಹಿರಿಯ ಪತ್ರಕರ್ತ ಶಂಕರನಾರಾಯಣ ಕಿದೂರು ಮತ್ತು ಕೃಷ್ಣವೇಣಿ ಕಿದೂರು ಇವರ ಪುತ್ರ.

17 November 2012

ಮಾದಕ ದ್ರವ್ಯ ವಿರುದ್ಧ ಜಾಗೃತಿ

ಇಂದು ಅರಾಹ್ನ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಸತೀಶ್ ಬಲ್ಲಾಳ್ ಮತ್ತು ಮದನನ್‌ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಉಪಯೋಗದ ವಿರುದ್ಧ ಜಾಗೃತಿ ತರಗತಿಯನ್ನು ನಡೆಸಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಕೆ. ಶಂಕರನಾರಾಯಣ ಶರ್ಮ ಧನ್ಯವಾದ ಸಮರ್ಪಿಸಿದರು. ಹಿರಿಯ ಶಿಕ್ಷಕಿ ಭುವನೇಶ್ವರಿ. ಎ ಕಾರ್ಯಕ್ರಮ ನಿರೂಪಿಸಿದರು.

ಗ್ಲಾಸ್ ಪೈಂಟಿಂಗ್ ಮತ್ತು ಭಾವಗೀತೆ ಗಾಯನ ತರಬೇತಿ

ಮೊನ್ನೆ 13.11.2012 ದೀಪಾವಳ ಹಬ್ಬದ ರಜೆಯ ದಿನ, ನಮ್ಮ ಶಾಲಾ ಆಕ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಎರಡು ವಿಭಿನ್ನ ಕಾರ್ಯಕ್ರಮಗಳನ್ನು ಶಾಲಾ ಆರ್ಟ್ಸ್ ಕ್ಲಬ್ ಆಯೋಜಿಸಿತು. ಉಪ್ಪಳ ಸರಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಜ್ಯೋತಿ ಕುಮಾರಿ. ಪಿ.ವಿ ವಿದ್ಯಾರ್ಥಿಗಳಿಗೆ ಭಾವಗೀತ ಗಾಯನ ತರಬೆತಿ ನೀಡಿದರು. ಶಾಲಾ ಸಂಚಾಲಕ ಶ್ರೀ ಜಯದೇವ ಖಂಡಿಗೆ ಇವರ ಪುತ್ರಿ ಕುಮಾರಿ ಸಂಜೋತಾ ವಿದ್ಯಾರ್ಥಿಗಳಿಗೆ ಗ್ಲಾಸ್ ಪೈಂಟಿಂಗ್ ಮಾಡುವ ವಿಧಾನದ ತರಬೇತಿ ನೀಡಿದರು. ಧನ್ಯವಾದಗಳು ಅವರಿಗೆ...