Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

22 December 2013

“ಸಮಾಜವು ಜೀವನಪಾಠವನ್ನು ಕಲಿಸುತ್ತದೆ: ಡಾ|ಡಿ.ಸದಾಶಿವ ಭಟ್”


“ಜೀವನಪಾಠಗಳನ್ನು ಸಮಾಜ ಕಲಿಸಿಕೊಡುತ್ತದೆ. ಅಧ್ಯಾಪಕರಿಗೆ ಎಲ್ಲವನ್ನೂ ಕಲಿಸಲು ಸಾಧ್ಯವಾಗುವುದಿಲ್ಲ. ನಮ್ಮ ಅನುಭವಗಳಿಂದ ಕಲಿತ ಪಾಠಗಳನ್ನು ಜೀವನದಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕು. ಅನುಭವವು ಸವಿಯಲ್ಲ, ಅದರ ನೆನಪೇ ಸವಿ. ಆದ್ದರಿಂದ ಲಲಿತ ಜೀವನವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ವಿದ್ವಾಂಸ ಡಾ| ಡಿ. ಸದಾಶಿವ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 22.12.2013 ಭಾನುವಾರ ಬೆಳಗ್ಗೆ ನಮ್ಮ ಶಾಲೆಗಳ ಶತಮಾನೋತ್ಸವದ ಅಂಗವಾಗಿ ಜರಗಿದ ‘ಗುರುವಂದನೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬ್ರಹ್ಮಶ್ರೀ ವೇ|ಮೂ| ಮಾಧವ ಉಪಾಧ್ಯಾಯ ಬಳ್ಳಪದವು, ಖ್ಯಾತ ಚಿತ್ರಕಲಾವಿದ ಪಿ.ಯಸ್. ಪುಣಿಂಚತ್ತಾಯ, ಕಾಸರಗೋಡು ತಹಶೀಲ್ದಾರರಾದ ಕೆ. ಶಿವಕುಮಾರ್, ಮಂಗಳೂರು ಎಂಸಿಎಫ್ ಜನರಲ್ ಮೇನೇಜರ್ ಪಿ. ಜಯಶಂಕರ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಗುರುವಂದನೆ ಸಲ್ಲಿಸಿದರು. ಶಾಲೆಯ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸಿದ ದಿ|ಖಂಡಿಗೆ ಶಾಮ ಭಟ್ಟರ ಪಂಚಲೋಹದ ಪ್ರತಿಮೆಯನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮತ್ತು ಎಲ್ಲರೂ ಈ ಕಾರ್ಯದಲ್ಲಿ ಸಹಕರಿಸಬೇಕಾಗಿ ಚಿತ್ರಕಲಾವಿದ ಪಿ.ಯಸ್. ಪುಣಿಂಚತ್ತಾಯ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿ ಕೆ.ನಾರಾಯಣ ಭಟ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್.ಶಿವಕುಮಾರ ವಂದಿಸಿದರು. ಪೂರ್ವ ವಿದ್ಯಾರ್ಥಿ ಶೇಂತಾರು ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಳೆ ವಿದ್ಯಾರ್ಥಿನಿ ಧನ್ಯಶ್ರೀ ಹಳೆಮನೆ ಇವರಿಂದ ಭಾವಗೀತೆ ಮತ್ತು ಕಾಕುಂಜೆ ಸಹೋದರಿಯರಾದ ಹೇಮಶ್ರೀ-ಶ್ರೀವಾಣಿ ಇವರಿಂದ ಶಾಸ್ತ್ರೀಯ ಸಂಗೀತ ಗಾಯನ ಜರಗಿತು.

ಶಾಲೆಯ ಆಕರ್ಷಕ ಮಾದರಿ:


ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹರಿಪ್ರಸಾದ್.ಕೆ.ಬಿ ಮತ್ತು ನವೀನ್ ಕುಮಾರ್ ಥರ್ಮೋಕೋಲ್‌ನಲ್ಲಿ ರಚಿಸಿದ ಮಹಾಜನ ವಿದ್ಯಾ ಸಂಸ್ಥೆಗಳ ಕಟ್ಟಡದ ಮಾದರಿ ಜನಮೆಚ್ಚುಗೆ ಗಳಿಸಿತು.

No comments:

Post a Comment