Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

22 December 2013

“ಕನ್ನಡ ನನ್ನ ಪ್ರೀತಿಯ ಭಾಷೆ: ಕಾವ್ಯಾ ಮಾಧವನ್”


“ಭಾಷೆ ಸಂವಹನೆಯ ಮಾಧ್ಯಮ. ಮಾತುಗಳಲ್ಲಿ ಸ್ವಲ್ಪ ತಪ್ಪಿದರೂ ವಸ್ತುವನ್ನು ಅರ್ಥಮಾಡಿಕೊಳ್ಳಬಹುದು. ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದುದರಿಂದ ಕನ್ನಡ ಭಾಷೆಯ ಬಗ್ಗೆ ನನಗೆ ಪ್ರೀತಿ ಇದೆ ಮತ್ತು ಅದನ್ನು ಅರ್ಥಮಾಡಿಕೊಳ್ಲಲು ಸಾಧ್ಯವಾಗುತ್ತಿದೆ. ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸುವ ಆಸೆ ಇದೆ. ಅದಕ್ಕೆ ಶೀಘ್ರದಲ್ಲೇ ಅವಕಾಶ ದೊರೆಯಬಹುದೆಂಬ ವಿಶ್ವಾಸವಿದೆ. ಖ್ಯಾತ ಜ್ಯೋತಿಷಿಗಳಾಗಿರುವ ಬೇಳ ಪದ್ಮನಾಭ ಶರ್ಮರು ನನಗೆ ಮಾರ್ಗದರ್ಶಕರು. ಅವರು ಕಲಿತು ಬೆಳೆದ ಈ ಶಾಲೆಯ ಭವಿಷ್ಯ ಉಜ್ವಲವಾಗಲಿ ಎಂದು ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರನಟಿ ಕಾವ್ಯಾ ಮಾಧವನ್ ಅಭಿಪ್ರಾಯಪಟ್ಟರು. ಅವರು ಇಂದು 22.12.2013 ಭಾನುವಾರ ಅಪರಾಹ್ನ ನಮ್ಮ ಶಾಲೆಗಳ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶ್ರೀರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಆಡಳಿತ ಮೊಕ್ತೇಸರರಾದ ಯು.ಟಿ. ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ, ಜ್ಯೋತಿಷಿ ಬೇಳ ಪದ್ಮನಾಭ ಶರ್ಮಾ, ಬಜ್ಪೆಯ ಕಾಮತ್ ಕಾಶ್ಯೂ ಕಂಪೆನಿ ಮಾಲಕ ಸೇವಗೂರು ಉಮೇಶ್ ಕಾಮತ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಖ್ಯಾತ ಕವಿ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಮತ್ತು ವಿಶ್ವವಿಖ್ಯಾತ ಬೊಂಬೆಯಾಟ ಕಲಾವಿದರಾದ ಕೆ.ವಿ.ರಮೇಶ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಶಾಲಾ ಶಿಕ್ಷಕರಾದ ವಾಣಿ.ಪಿ.ಎಸ್ ಮತ್ತು ರವಿಶಂಕರ ದೊಡ್ಡಮಾಣಿ ವಾಚಿಸಿದರು.
ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಿ|ಖಂಡಿಗೆ ಶಾಮ ಭಟ್ಟರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು.
ಸಂಜೆ 7 ರಿಂದ  ವಿವಿಧ ವಿನೋದಾವಳಿಗಳು ಮತ್ತು ಅಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟವ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಕಥಾನಕಗಳನ್ನು ಆಡಿತೋರಿಸಲಾಯಿತು.







No comments:

Post a Comment