“
ಜಗತ್ತು ಸಂವಹನ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ
ಬೆಳೆಯುತ್ತಿದೆ. ವಿದೇಶಗಳಲ್ಲಿರುವ ಪ್ರತಿಯೊಬ್ಬರ ನಡುವೆಯೂ ಪ್ರಸ್ತುತ ಕ್ಷಣಮಾತ್ರದಲ್ಲಿ ಆಶಯ
ವಿನಿಮಯ ಸಾಧ್ಯವಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಕಂಡು ಬರುತ್ತಿದೆ. ಈ
ವಿದ್ಯಮಾನಕ್ಕೆ ಶಿಕ್ಷಣ ಸಂಸ್ಥೆಗಳೂ ಹೊರತಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಯಲ್ಲಿ
ಮುಖ್ಯವಾಹಿನಿಯ ವಿದ್ಯಾಸಂಸ್ಥೆಗಳು ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ
ತಲೆದೋರುತ್ತಿದೆ. ಈ ಸಂದರ್ಭದಲ್ಲಿ ಶಾಲೆಗಳು ಸಮಾಜದೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾದ
ಅನಿವಾರ್ಯತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ‘
ಬ್ಲಾಗ್’
ಗಳು ಸುಲಭ
ವ್ಯವಸ್ಥೆಗಳಾಗಿವೆ. ಎಲ್ಲ ಶಾಲೆಗಳು ಬ್ಲಾಗ್ ಮೂಲಕ ಶಾಲೆಯ ಚಟುವಟಿಕೆಗಳನ್ನು ಜಗತ್ತಿನ ಜೊತೆ
ಹಂಚಿಕೊಳ್ಳಬಹುದು. ಎಂದು ಡಯಟ್ ಮಾಯಿಪ್ಪಾಡಿಯ ಉಪನ್ಯಾಸಕ ಡಾ|
ರಘುರಾಮ ಭಟ್ ಕೋಂಗೋಟು ಅಭಿಪ್ರಾಯಪಟ್ಟರು. ಅವರು ಇಂದು
ಕುಂಬಳೆ ಉಪಜಿಲ್ಲಾ ಮಟ್ಟದ ಅಧ್ಯಾಪಕರಿಗಾಗಿ ‘
ಡಯಟ್’
ಸಂಸ್ಥೆಯ ನೇತೃತ್ವದಲ್ಲಿ ನಮ್ಮ ಶಾಲೆಯಲ್ಲಿ ಕೊನೆಯ ಹಂತದ
‘
ಬ್ಲೆಂಡ್ - ಬ್ಲಾಗ್ ತಯಾರಿ
ಮತ್ತು ತರಬೇತಿ’
ಯನ್ನು ಉದ್ದೇಶಿಸಿ
ಮಾತನಾಡುತ್ತಿದ್ದರು.
ಶಾಲಾ ಹಿರಿಯ ಶಿಕ್ಷಕ ಸಿ.ಎಚ್. ವೆಂಕಟರಾಜ ಅಧ್ಯಕ್ಷತೆ
ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅನಿಲ್
ಕುಮಾರ್ ಮತ್ತು ನಮ್ಮ ಶಾಲೆಯ ರವಿಶಂಕರ ದೊಡ್ಡಮಾಣಿ
ಉಪಸ್ಥಿತರಿದ್ದರು. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಂದ್ರನ್ ಸ್ವಾಗತಿಸಿ,
ಸೂರಂಬೈಲು ಸರಕಾರಿ
ಪ್ರೌಢಶಾಲೆಯ ಶಿಕ್ಷಕ ಇಸ್ಮಾಯಿಲ್ ಕೆ.ಎಂ ವಂದಿಸಿದರು. ಕುಂಟಿಕಾನ ಅನುದಾನಿತ ಹಿರಿಯ ಪ್ರಾಥಮಿಕ
ಶಾಲಾ ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment