Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

06 June 2017

ಶಾಲಾ ಸುರಕ್ಷಾ ಸಮಿತಿ


ಶಾಲಾ ಪರಿಸರದಲ್ಲಿ ಮಾದಕ ದ್ರವ್ಯ ಉಪಯೋಗವನ್ನು ನಿಯಂತ್ರಿಸಲು ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಲು ಶಾಲಾ ಸುರಕ್ಷಾ ಸಮಿತಿಯನ್ನು ಇಂದು ರೂಪೀಕರಿಸಲಾಯಿತು. ಈ ಸಮಿತಿಯು ಶಾಲೆ ಮತ್ತು ಪರಿಸರದ ವಾತಾವರಣವನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಉಳಿಸಲಿದೆ. ಈ ಸಮಿತಿಯ ಪದಾಧಿಕಾರಿಗಳನ್ನು ಇಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಸಂಚಾಲಕರಾಗಿ ಬದಿಯಡ್ಕ ಪೋಲೀಸ್ ಠಾಣೆಯ ಎಸ್.ಐ ಅಂಬಾಡಿ.ಕೆ.ಆರ್ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ.ಕೆ, ಶಾಲಾ ಶಿಕ್ಷಕರಾದ ಶ್ರೀಮತಿ ವಿನೋದಿನಿ.ಕೆ, ಶಿವಪ್ರಕಾಶ್.ಎಂ.ಕೆ, ಸಂತೋಷ್.ಪಿ.ಎಚ್, ರಂಜಿತ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ, ಆಟೋರಿಕ್ಷಾ ಡ್ರೈವರ್ ಸದಾನಂದ.ಪಿ ಮತ್ತು ಶಾಲಾ ಬಸ್ ಚಾಲಕ ಗಂಗಾಧರ.ಪಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಶಾಲಾ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಶಾಲೆಯನ್ನು ಸುರಕ್ಷಿತವಾಗಿ ಇರಿಸಲಿದೆ.

No comments:

Post a Comment